Thursday, October 01, 2009

Google's birthday: When exactly is it?

The search giant celebrated its 11th birthday on September 27—and its 10th birthday on September 2 last year. Are they so unsure when it was born?

Astrologers will argue about the right birth time that they use to draw a chart. Is it the time when the baby emerges from the womb or the time the umbilical cord is cut? Arguments will always be there, and one astrologer's word is as good as another's, especially if both are highly experienced.

With Google, we seem to have another problem—the date itself. When was the company created, and when can we celebrate its birthday? Nobody seems to know, not even the company itself.


Some possibilities

One birthday that we can take is the date the site google.com was registered. According to WHOIS information, this happened on September 15, 1997—and by this reckoning, it is already over twelve years old.

We could also look at the date the company was registered, and Wikipedia says that this happened on September 4, 1998, in California. Wikipedia gives a link to the California Business Portal, which says that a request to form a company called 'GOOGLE TECHNOLOGY INC.' (Number: C2119530) was filed on September 4, 1998 and lists the 'Agent for Service of Process' as 'DAVID C DRUMMOND'. Just for the record, today, Google's site says that David C Drummond is a senior VP for corporate development and chief legal officer with the company.

Check the cheque
One nice day on which Google could celebrate its birthday is the day they deposited their first cheque. Let's face it, just as the first dollar (or rupee) you made is important to you, the first cheque that a company gets is important to them.
The first cheque in this case was worth $1 lakh and given to Larry Page and Sergey Brin by Sun co-founder Andy Bechtolsheim in August 1998. The cheque was made out to a company called Google Inc and was deposited in September after the company was established. We don't know the date—Google's own page that gives corporate information and timelines says that this was done shortly after September 4, when the company's incorporation papers were filed.

Only Brin, Page, or the bank can tell us the exact date when the cheque was deposited. And until we get this information, we can always celebrate Google's birthday in September.


Happy Birthday, Google!


When were they registered?

Canada google.ca Oct 03, 2000
India google.co.in Jun 23, 2003
Japan google.co.jp Mar 22, 2001
Malaysia google.com.my Jul 31, 2003
Saudi Arabia google.com.sa Oct 15, 2003

Monday, June 01, 2009

ತುಂಬಿತು ವರುಷ.. ತಂದಿದೆಯೇ ಹರುಷ?

ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ,
ನಿಮ್ಮ ನೇತೃತ್ವದಲ್ಲಿ ನಮ್ಮ ಭಾರತೀಯ ಜನತಾ ಪಾರ್ಟಿಯ ಸರ್ಕಾರ ಒಂದು ವರ್ಷ ತುಂಬಿದ ಈ ಸಂದರ್ಭದಲ್ಲಿ ನಿಮಗೆ ನನ್ನ ಬೇವು ಬೆಲ್ಲ. ಈ ಒಂದು ವರ್ಷದಲ್ಲಿ ನಿಮ್ಮಿಂದ ಜನರಿಗೆ ಆಗಿರುವ ಅಭಿವೃಧ್ಧಿ ಕಾರ್ಯಗಳ ಘೋಷಣೆಗಳು ಶ್ಲಾಘನಿಯ. ನಮ್ಮ ಸರ್ಕಾರದ ಸದೃಡತೆಗೆಂದು ನೀವು ಕೈಗೊ೦ಡ "ಆಪರೇಷನ್ ಕಮಲ"ವನ್ನು ನಾವು ಒಪ್ಪುತ್ತೇವೆ. ಹಲವಾರು ಚುನಾವಣೆಗಳಿದ್ದ ಈ ವರ್ಷದಲ್ಲಿ ನಿಮ್ಮ ಸಾಧನೆ ತೃಪ್ತಿಕರವಾಗಿದೆ. ಚುನಾವಣೆಯ ನಂತರ ನಿಮ್ಮ ಮೊಗದಲ್ಲಿ ಕಾಣಸಿಗುತ್ತಿರುವ ಮುಗುಳ್ನಗೆ ನಮ್ಮಲ್ಲೂ ಹರ್ಷವನ್ನು, ಹೊಸ ಆಸೆಯನ್ನು ತುಂಬಿದೆ. ಆದರೆ, ಈ ಒಂದು ವರ್ಷದ ನಿಮ್ಮ ಸಾಧನೆ ನಿಜವಾಗಿಯೂ ಜನರಲ್ಲಿ ಸಂತಸ, ಸಮಧಾನವನ್ನು ತಂದಿದೆಯೆ ಎಂದು ಪ್ರಶ್ನಿಸಿಕೊಂಡರೆ ಉತ್ತರ ಬಲು ಸುಲಭ. ಇಲ್ಲಾ. ನಿಮ್ಮ ಸರ್ಕಾರದ ಈ ಒಂದು ವರ್ಷದ ಸಾಧನೆ ಬರೀ ಶೂನ್ಯ. ನಿಮ್ಮ ಒಳ ರಾಜಕೀಯ, ಪುತ್ರ ವಾತ್ಸಲ್ಯ, ನಿಮ್ಮ ಹಾಗೂ ಗಣಿ ಧಣಿಗಳ ದೊಂಬರಾಟ, ನಿಮ್ಮ ಒಳ (ಒಣ) ರಾಜಕೀಯ ಇನ್ನು ಹತ್ತು ಹಲವಾರು ಸಂಗತಿಗಳು ನಿಮ್ಮ ಸರ್ಕಾರದ ಮೇಲೆ ನಮಗಿದ್ದ ಆಸೆಯನ್ನು ಮಣ್ಣು ಪಾಲು ಮಾಡಲು ಮಾತ್ರ ಯಶಸ್ವಿಯಾಗಿದೆ. ಈ ಸರ್ಕಾರವನ್ನು ನಾವು ನಮ್ಮ ಸರ್ಕಾರ ಎಂದು ಹೇಳಲು ನಾಚಿಕಿಯಾಗಿದೆ.


ನಾ ಕಂಡ ಮುಖ್ಯಮಂತ್ರಿಗಳ ಪೈಕಿ ನಿಮ್ಮನ್ನು ನಾನು "ಕೋಟಿ" ಮುಖ್ಯಮಂತ್ರಿಯೆಂದು ಬಣ್ಣಿಸಲು ಇಚ್ಚಿಸುತ್ತೇನೆ. ಏನೇ ಅವಘ್ಹಡವಾದರೂ ನಿಮ್ಮಿಂದ ಜನರಿಗೆ ಸಿಗುತ್ತಿರುವುದು ಒಂದು / ಎರಡು ಕೋಟಿ ಪರಿಹಾರ ಧನದ ಪೊಳ್ಳು ಭರವಸೆಯೊಂದೆ. ಈ ಒಂದು ವರ್ಷದಲ್ಲಿ ನೀವು ಜನರಿಗೆ ಸರಿ ಸುಮಾರು ಎಷ್ಟು ಕೋಟಿ ಪರಿಹಾರ ಧನದ ಭರವಸೆ ನೀಡಿರುವಿರಿ, ಹಾಗೂ ಎಷ್ಟು ಜನರಿಗೆ ನಿಮ್ಮ ಪರಿಹಾರ ಕೈ ಸೇರಿದೆ ಎಂಬ ಅರಿವು ನಿಮಗಿದೆಯೆ. ಪಕ್ಷೇತರ ಶಾಸಕರ ಬೆಂಬಲ ಇದ್ದರೂ ಸರ್ಕಾರದ ಸುಭದ್ರತೆಗೆಂದು ಆಪರೇಷನ್ ಕಮಲ ನಡೆಸಿದಿರೆಂದು ಸಮಧಾನ ನೀಡುತ್ತಿರುವ ನಿಮ್ಮ ಸರ್ಕಾರ, ನಾಳೆ ನಿಮ್ಮ ಪಕ್ಷದ ಶಾಸಕರೇ ಪಕ್ಷಾಂತರ ಮಾಡಿದರೆ ಹೇಗೆ ಸುಭದ್ರ ಸರ್ಕಾರ ನೀಡುವಿರಿ? ಹಾಗೇನಾದರು ಆದರೆ, ಜನರ ಮೇಲೆ ನೀವು ವಿನಾಕಾರದ ಹೇರಿದ ಉಪಚುನಾವಣೆಗಳ ಲಾಭವೇನು? ಇದು ಜನರ ಮತಕ್ಕೆ ನೀವು ಮಾಡಿದ ಧ್ರೋಹವೆಂಬ ಅರಿವು ನಿಮಗ್ಗಿಲ್ಲವೆ. ಒಂದು ದಿನ ಐವತ್ತು ವರ್ಷದಲ್ಲಿ ಆಗಿರದ ಸಾಧನೆ ನಾವು ಮಾಡಿದ್ದೇವೆ ಎಂದು ಹೇಳುವ ನಿಮ್ಮ ಸರ್ಕಾರದ ಪ್ರತಿನಿಧಿಗಳು, ಮರುದಿನ ಒಂದು ವರ್ಷದಲ್ಲಿ ಏನು ಸಾಧಿಸಲು ಸಾಧ್ಯ, ನಮಗೂ ಸ್ವಲ್ಪ ಸಮಯಾವಕಾಶ ಕೊಡಿ ಎಂದು ಬೇಡುವುದು ಹಾಸ್ಯವಾಗಿದೆ. ಉಪಚುನಾವಣೆಯ ಸಮಯದಲ್ಲಿ ಆ ಕ್ಷೇತ್ರಗಳಿಗೆ ವಿಶೇಷ ಅನುಧಾನ ಘ್ಹೋಶಿಸಿದ ನೀವು, ಈಗ ಬಿಬಿಎಂಪಿ ಚುನಾವಣೆ ಬಂದಾಗ ದಿನಕ್ಕೊಂದರಂತೆ ಬೆಂಗಳೂರಿನಲ್ಲಿ ಯೋಜನೆಗಳನ್ನು ಘೋಶಿಸಿರುವುದನ್ನು ನೋಡಿದರೆ ನಿಮ್ಮ ಗುರಿ ಕೇವಲ ಚುನಾವಣೆಗಳನ್ನು ಗೆಲ್ಲುವುದು ಮಾತ್ರ ಎಂಬ ಅರಿವು ಮೂಡುತ್ತದೆ.


ಮುಖ್ಯಮಂತ್ರಿಗಳೇ, ನಿಮ್ಮಿಂದ ನಾವು ಬಹಳಷ್ಟು ನಿರೀಕ್ಷಿಸುತ್ತಿದ್ದೇವೆ. ನಮ್ಮ ಕನಸುಗಳನ್ನು ಮಣ್ಣಿನಲ್ಲಿ ಕಟ್ಟಿದ ಮನೆಯಾಗಿಸಬೇಡಿ. ಹಿಂದಿನ ಸರ್ಕಾರದಂತೆ ನಿಮ್ಮ ಸರ್ಕಾರ ಕೂಡ ಬರೀ ಮಾತಿನಲ್ಲಿ ಸ್ವರ್ಗ ತೋರಿಸದಂತಾಗಲಿ. ನಿಮ್ಮಿಂದ ದಿನಕ್ಕೊಂದು ಹೊಸ ಯೋಜನೆಯನ್ನೋ ಅಥವಾ ದಿನಕ್ಕೊಂದು ಭರವಸೆಯನ್ನೋ ನಾವು ನಿರೀಕ್ಷಿಸುವುದಿಲ್ಲಾ. ಹೊಸ ಭರವಸೆ ನೀಡುವ ಮುನ್ನ ಹಳೇ ಯೋಜನೆಗಳನ್ನು ಪೂರ್ಣಗೊಳಿಸಿ. ವರ್ಷಕ್ಕೋಂದೇ ಯೋಜನೆಯಿದ್ದರೂ ಚಿಂತೆಯಿಲ್ಲಾ, ಅದು ಲಕ್ಷಾಂತರ ಜನರಿಗೆ ಭಾಗ್ಯ ಜ್ಯೋತಿಯಾಗಲಿ. ಬೇರೆ ಹಿರಿಯ ರಾಜಕಾರಣಿಗಳಂತೆ ಪೂಜೆ, ಪುನಸ್ಕಾರ, ಮಾಟ ಮಂತ್ರಗಳನ್ನು ನಂಬಿಕೆಡಬೇಡಿ. ನಿಮ್ಮ ಭಕ್ತಿ ನಿಮ್ಮ ಮನೆಯಲ್ಲೇ ಇರಲಿ. ಮಠ, ಮಂದಿರಗಳ ಬದಲು ಜನರ ಬಾಗಿಲಿಗೆ ಹೋಗಿ. ಅವರ ಮನೆಯಲ್ಲಿ ಉಂಡು ಮಲಗುವ ಬದಲು ಅವರ ಬವಣೆ ನಿವಾರಿಸಿ. ದ್ವೇಷ ರಾಜಕೀಯ ಮಾಡಬೇಡಿ, ಬದಲಾಗಿ ನೀವು ಎಲ್ಲಿ ಸೋತಿರುವಿರೋ ಆ ಕ್ಷೇತ್ರಗಳ ಅಭಿವೃಧ್ಧಿಗೆ ಹೆಚ್ಚಿನ ಆಧ್ಯತೆ ಕೊಡಿ. ನಿಮ್ಮ ಸರ್ಕಾರದ ಯೋಚನೆಗಳ ಜಾಹೀರಾತಿನಲ್ಲಿ ನೀವು ಮಾತ್ರ ನಕ್ಕರೆ ಸಾಲದು, ನಿಮ್ಮ ಯೋಜನೆಯ ಉಪಯೋಗ ಪಡೆಯುತ್ತಿರುವ ಪ್ರತಿಯೊಬ್ಬರು ನಗಬೇಕು. ಹೆಮ್ಮೆಯಿಂದ ಹೇಳಿಕೊಳ್ಳಲು ಒಂದೇ ಒಂದು ಉತ್ತಮ ಕೆಲಸ ಮಾಡಿ, ನಿಮ್ಮ ಸರ್ಕಾರವನ್ನು ಗೆಲ್ಲಿಸಿದ್ದಕ್ಕೆ ನಾವು ಹೆಮ್ಮೆ ಪಡುತ್ತೇವೆ.


ಇಷ್ಟೆಲ್ಲಾ ಬರೆದಿದ್ದರ ಕಾರಣ ಒಂದೇ. ನೀವೀಗ ಎಡವಿದರೆ ಜನರು ರಾಜಕೀಯ ಪಕ್ಷಗಳ ಮೇಲೆ ಇರುವ ಅಲ್ಪ ಸ್ವಲ್ಪ ನಂಬಿಕೆಯನ್ನೂ ಕಳೆದುಕೊಳ್ಳುತ್ತಾರೆ. ಈ ಸರ್ಕಾರ ಕೇವಲ ಬದಲಾವಣೆಗೆಂದು ಬಂದು ಹೋದ ಸರ್ಕಾರವಾಗಬಾರದು. ಭಾರತೀಯ ಜನತಾ ಪಾರ್ಟಿಯ ಸರ್ಕಾರ ಇನ್ನೊಮ್ಮೆ ಅಧಿಕಾರ ನಡೆಸುವುದನ್ನು ನಾವು ಬಯಸುತ್ತೇವೆ.

Monday, April 13, 2009

ಬಾಡಿ ಹೋದ ಬಳ್ಳಿಯಿಂದ ಹೂವು ಅರಳ ಬಲ್ಲದೇ?

"ಅಯ್ಯಪ್ಪ! ಈ ವರ್ಷ ಏನ್ ಬಿಸ್ಲು ಮಾರಾಯಾ, ಮನೆಯಿಂದ ಆಚೆಬರೋಕ್ಕೆ ಆಗಲ್ಲ. ಹೋದ್ ವರ್ಷ ಇಷ್ಟು ಬಿಸ್ಲು ಇರ್ಲಿಲ್ಲಾ. ಈಗ್ಲೆ ಹೀಗೆ, ಇನ್ನಾ ಮೇ, ಜೂನ್ ಹೊತ್ತಿಗೆ ಏನ್ ಗತಿನೋ". ಇದು ಈನಡುವೆ ನಾವು ಪ್ರತಿ ವರ್ಷ ತಪ್ಪದೆ ಹೇಳುತ್ತಿರುವ, ಕೇಳುತ್ತಿರುವ ಮಾತು. ಬೇಸಿಗೆ ಬಂತು ಅಂದ್ರೆ ಸಾಕು ಮನೆಯಲ್ಲಿರುವ ಎಲ್ಲಾ ಕಿಡಕಿಗಳನ್ನು ತೆಗೆಯದೆ, ಮನೆಯಲ್ಲಿರುವ ಎಲ್ಲಾ ಫ್ಯಾನ್ ಗಳನ್ನು ಉರಿಸದೆ ಇರಲಾಗುವುದಿಲ್ಲ. ರಾತ್ರಿ ಹೊತ್ತು ಮನೆ ಮಹಡಿ ಮೇಲೆ ಹೋಗಿ ಮಲಗುವುದು ಸರ್ವೇ ಸಾಮಾನ್ಯವಾಗಿದೆ. ಊಟ, ತಿಂಡಿ ಮಾಡುವುದಕ್ಕಿಂತ ಎಳನೀರು, ಮಜ್ಜಿಗೆ ಮುಂತಾದ ತಂಪು ಪಾನೀಯಗಳ ಮೊರೆ ಹೋಗುತ್ತೇವೆ. ಮಧ್ಯಾಹ್ನ ಐದು ನಿಮಿಷ ಮನೆಯಿಂದ ಆಚೆ ಬಂದರೆ ಸಾಕು ಯಾವ ಜನುಮದಲ್ಲಿ ಏನ್ ಪಾಪ ಮಾಡಿದ್ವಪ್ಪಾ ಅನ್ನಿಸೋ ಹಾಗಾಗುತ್ತದೆ. ಎಲ್ಲಾದರು ಮರದ ನೆರಳು, ಇಲ್ಲಾ ಅಂಗಡಿಯ ನೆರಳು ಸಿಕ್ಕರೆ ಆ ಮಾರ್ಗದಲ್ಲೆ ಹೋಗೋಣ, ಎಷ್ಟು ದೂರವಾದ್ರು ತೊಂದರೆ ಇಲ್ಲಾ ಅಂತ ಮನಸ್ಸು ಹೇಳ್ತಿರತ್ತೆ. ಊರೆಲ್ಲಾ ಸುತ್ತಾಡಿ, ಮನೆ ತಲುಪಲು ಸಿಟಿ ಬಸ್ ಹತ್ತಿದಾಗ ನಮ್ಮ ದುರಾದೃಷ್ಟಕ್ಕೆ ಸೀಟ್ ಸಿಗ್ಲಿಲ್ಲಾ ಅಂದ್ರೆ, ಯಾರ್ ಯಾರ್ ಮೇಲೆ ಯಾವ್ ತರದ ಸಿಟ್ಟು ಪ್ರಯೋಗ ಆಗುತ್ತೋ ನಮಗೆ ತಿಳಿದಿರೋದಿಲ್ಲಾ. ಮನೆಗೆ ಬಂದು ಒಂದು ಗ್ಲಾಸ್ ನೀರು ಕುಡಿಯೋವರೆಗು ಆ ಕೋಪ ಆರುವ ಮಾತಾಡಲ್ಲಾ.
ದಿನದಿಂದ ದಿನಕ್ಕೆ ತಾಪಮಾನ ಏರುತ್ತಿದೆ, ಮರಗಳ ಸಂಖ್ಯೆ ಕಡಿಮೆ ಆಗ್ತಾ ಇದೆ. ಮಲೆನಾಡಿಗು, ಬಯಲುಸಿಮೆಗು ವ್ಯತ್ಯಾಸವೇ ಇಲ್ಲದಂತಾಗಿದೆ. ಒಂದು ಹನಿ ಮಳೆಗಾಗಿ ಹಪಹಪಿಸುತ್ತಿದ್ದೇವೆ. ಬರಗಾಲ ವರ್ಷದ ಒಂದು ಭಾಗವಾಗಿದೆ. ಅಭಿವೃಧ್ಧಿ, ಮೆಟ್ರೋ, ಟ್ರಾಫಿಕ್ ಸಮಸ್ಯೆ, ರಸ್ತೆ ಅಗಲೀಕರಣ ಮುಂತಾದ ಕಾರಣಗಳಿಗೆ ನಗರ ಪ್ರದೇಶದಲ್ಲಿರೋ ಮರಗಳು ನೆಲಕ್ಕುರುಳಿವೆ. SEZ ಗೆ ಕಾಡು ನಾಡಾಗಿ ಮಾರ್ಪಟ್ಟಿದೆ. ಕೆರೆ, ಪಾರ್ಕುಗಳಿದ್ದ ಜಾಗದಲ್ಲಿಂದು ಐಶಾರಾಮಿ ಅಪಾರ್ಟಮೆಂಟುಗಳು ತಲೆಎತ್ತಿವೆ. ಮರಗಳಿಗೆ ಸಂಖ್ಯೆ ಕೊಟ್ಟು ಲೆಕ್ಕಹಾಕುವ / ಕಾಪಾಡುವ ಸ್ಥಿತಿಗೆ ಬಂದು ತಲುಪಿದ್ದೇವೆ. ರೇಂಜ್ ಆಫೀಸರ್, ಪಾರೆಸ್ಟ್ ಆಫೀಸರ್ ಗಳ್ಳಿದ್ದರು, ಮರಗಳ ಕಳ್ಳಸಾಗಣಿಗೆ ರಾಜಾರೋಷವಾಗಿ ಜಾರಿಯಲ್ಲಿದೆ. ನಾಶದ ಅಂಚಿನಲ್ಲಿರುವ ಹಲವಾರು ಪ್ರಾಣಿ ಪಕ್ಷಿಗಳನ್ನು ನಾವು ಇಂದು ಪ್ರಾಣಿ ಪಕ್ಷಿಧಾಮಗಳಲ್ಲಿ ನೋಡಬಹುದು. ಆದರೆ, ನಮ್ಮಲ್ಲಿದ್ದ ಹಾಗು ಅಲ್ಪ ಸ್ವಲ್ಪ ಊಳಿದಿರುವ ವನ್ಯ ಸಂಪತ್ತು ನಾಶವಾದರೆ? ಇಂತ ಒಂದು ಯೋಚನೆ ಮನಸ್ಸಿಗೆ ಬಂದರೇನೆ ಭಯವಾಗುತ್ತದೆ. ನಮ್ಮಲ್ಲಿರುವುದು ಕೇವಲ ಮರಗಳಲ್ಲ. ಆ ಮರಗಳಿಗೆ ತನ್ನದೇ ಆದ ಅದ್ಬುತ ಇತಿಹಾಸವಿದೆ. ಒಂದೊಂದು ಮರವು ತಾನು ಕಂಡ ಈ ನಾಡಿನ ಸೊಬಗನ್ನು ಹೆಮ್ಮೆಯಿಂದ ನಮಗೆ ಹೇಳುತ್ತಿದೆ. ಒಂದೊಂದು ಕಾಡು ತಾನು ಈ ಭೂಮಿಗಿಳಿಸಿದ ಮಳೆಯ ಪ್ರಮಾಣದ ದಾಖಲೆಯನ್ನು ಸಾರಿ ಹಿಗ್ಗುತ್ತಿದೆ. ಒಂದೊಂದು ಮರವು ತನ್ನ ನೆರಳಿನಲ್ಲಿ ಇಂತಿಂಧ ಋಷಿ ಮುನಿಗಳು ಸಾಧನೆ ಮಾಡಿರುವರೆಂದು ಪುನೀತಗೊಂಡಿದೆ. ನಮ್ಮ ಕಾಡಿನ ಮರಗಳಲ್ಲಿ ಅಪಾರವಾದ ವೈಧ್ಯಕೀಯ ಶಕ್ತಿಯಿದೆ. ಮಾತ್ರೆಗಳಿಂದ ಗುಣವಾಗದ ಅದೆಷ್ಟೋ ಖಾಯಿಲಿಗೆ ನಾವು ಆಯುರ್ವೇಧದ ಮೊರೆ ಹೋಗುತ್ತೇವೆ. ಹಾಗು ಆಯುರ್ವೇಧದಿಂದ ಎಷ್ಟೋ ಖಾಯಿಲಿಗಳು ಗುಣವಾಗಿ ಮನುಷ್ಯ ಇಂದು ಸಂತಸದಿಂದ ಜೀವಿಸುತ್ತಿದ್ದಾನೆ. ನಮ್ಮ ನಾಡಿನಲ್ಲಿ ಬೆಳೆಯುವ ಗಿಡಗಳಲ್ಲಿ ವಿವಿಧಬಗೆಯ ಫಲ ಪುಷ್ಪಗಳು ದೋರೆಯುತ್ತವೆ. ಅವುಗಳನ್ನು ಲೆಕ್ಕವಿಡುವ ಮಾತು ಹಾಗಿರಲಿ ನಮ್ಮಲಿ ಎಷ್ಟೋ ಮಂದಿಗೆ ಅವುಗಳ ಹೆಸರುಗಳು ತಿಳಿದಿಲ್ಲಾ. ಆ ಹೂಗಳ ಅಂದ ಚೆಂದ ಬಣ್ಣಿಸಲು ಕೇವಲ ಕವಿಗಳಿಗಷ್ಟೆ ಸಾಧ್ಯ.
ಆದರೆ ಈ ಸೊಬಗನ್ನು ಇಂದು ನಾವೆಲ್ಲಿ ಕಾಣುತ್ತಿದ್ದೇವೆ? ಯಾರ ಯಾರ ಮನೆಗಳ ಮುಂದಿಂದು ಗಿಡ ಮರಗಳಿವೆ. ಗಿಡ ಮರಗಳನ್ನು ಬೆಳೆಸಿದರೆ ಎಲ್ಲಿ ಹಾವು ಬರುವುದೋ, ಎಲ್ಲಿ ನಮ್ಮ ಮನೆ ಕಳ್ಳರ ಅಡುಗುತಾಣವಾಗುವುದೋ ಎಂದು ಎಲ್ಲರು ಅಂಜುತ್ತೇವೆ. ನಾನು ಸಣ್ಣವನಾಗಿದ್ದಾಗ ಅಂದಿನ ಜನಪ್ರಿಯ ವಾಹಿನಿ ದೂರದರ್ಶನದಲ್ಲಿ ಹೀಗೊಂದು ಹಾಡು ಪ್ರಸಾರವಾಗುತಿತ್ತು. "ಗಿಡ ನೆಡಿ ಗಿಡ ನೆಡಿ ಗಿಡ ನೆಡಿ ಮನೆಯ ಮುಂದೊಂದು ಗಿಡ ನೆಡಿ, ಮನೆಯ ಹಿಂದೊಂದು ಗಿಡ ನೆಡಿ. ನೆಟ್ಟ ಗಿಡಕೆ ನೀರು ಹಾಕಿ ಬಾಳು ಕೋಡಿ". ಈ ಸಾಲು ಎಷ್ಟು ಅರ್ಥಪೂರ್ಣವಾಗಿದೆಯಲ್ಲವೆ. ಮನೆಯ ಮುಂದೊಂದು ಮರವಿದ್ದರೆ ಆ ಮನೆಯ ಸೋಬಗು ಮೂರರಷ್ಟು ಹೆಚ್ಚುತ್ತದೆ. ಇದಕ್ಕೆ ಯಾವ ನೆರೋಲೆಕ್ಸ್ ಪೇಂಟ್ ನ ಸಹಾಯವು ಬೇಡ. ಸಂಜೆಯ ಸಮಯದಲ್ಲಿ ನಿಮ್ಮ ದಿನನಿತ್ಯದ ಜೀವನದ ಜಂಜಾಟವನ್ನು ಮುಗಿಸಿ, ನಿಮ್ಮ ಮನೆಯ ಆವರಣದಲೋ ಅಥವ ನಿಮ್ಮ ಮನೆಯ ಜಗುಲಿಯ ಮೇಲೋ ಕೂತು ನಿಮ್ಮ ಮನೆಯವರ ಜೊತೆ ಮಾತಾಡುವಾಗ ಹಿತವಾಗಿ ಗಾಳಿ ಬೀಸಿದಾಗ ಸಿಗುವ ಆನಂದ ಯಾವ ಎ.ಸಿ.ಯಿಂದ ತಾನೆ ಸಿಗಲು ಸಾಧ್ಯ. ನಿಮ್ಮ ಮನೆಯ ಮುಂದೆ ನೀವು ಅಕ್ಕರೆಯಿಂದ ಬೆಳೆಸಿದ ಸಣ್ಣ ಹೂದೋಟಕ್ಕೆ ನೀರೆರುಯುವಾಗ ಆಗುವ ವ್ಯಾಯಾಮ ಯಾವ ಜಿಮ್ ನಿಂದ ದೊರೆಯಲು ಸಾಧ್ಯ. ಆ ಹೋದೋಟದಲ್ಲಿ ಅದೊಂದು ದಿನ ಚೆಂದದಹೂ ಮೂಡಿದಾಗ ನಿಮ್ಮ ಮುಖದಲ್ಲಿ ಮೂಡುವ ನಗುವಿಗೆ ಬೆಲೆಕಟ್ಟಲಾದೀತೆ. ನಿಮ್ಮ ಮನೆಯ ಕಾಂಪೌಡಿಗೋ, ಗೋಡೆಗೋ ನೀವು ಬೆಳೆಸಿದ ಗಿಡ ಭಾರವಾಗಿ, ಆ ಗಿಡವನ್ನೇ ಕಡೆಯುವಾಗ, ನಿಮ್ಮ ಮಕ್ಕಳನ್ನೇ ಕಳೆದು ಕೊಂಡಷ್ಟು ನೋವಾಗುದಿಲ್ಲವೇ. ಆ ನೋವನ್ನು ಮರೆಯಲು ಅದೆಷ್ಟು ದಿನಬೇಕೋ ಹೇಳತೀರದು.
ಆದರೆ ಈ ಸುಃಖ ದು:ಖಗಳೆಲ್ಲಾ ಈಗ ಕೇವಲ ಕಲ್ಪನಾ ಲೋಕದಲ್ಲಿವೆಯಷ್ಟೆ. ಕಾಡು ತನ್ನ ಪದದ ಅರ್ಥವನ್ನು ಕಳೆದು ಕೊಂಡಿದೆ. ಮರಗಿಡಗಳು ಕೇವಲ ಕಾಡಿಗಷ್ಟೆ ಸೀಮಿತವಾದಂತಿದೆ. ನಾಡಿನಲ್ಲಿ ಕಾಂಕ್ರೀಟೇ ಕಾಡಗಿದೆ. ನಿರ್ಧಿಷ್ಟ ಪ್ರದೇಶವನ್ನು ಗುರುತು ಹಾಕಿ ಅಲ್ಲಿ ಮಾತ್ರ ಮರಗಳನ್ನು ಬೆಳೆಸಿ ಕಾಡನ್ನು ಸೃಶ್ಠಿಸಿ, ಆ ಪ್ರದೇಶವನ್ನು ಪ್ರವಾಸಿ ತಾಣವಾಗಿಸುವ ಕಾಲ ಬಂದಾಗಿದೆ. ಇಂದು ಯಾರ ಮನೆ ಮುಂದೆ ನೋಡಿದರು ಒಂದು ಕಾರಿರುತ್ತದೆ ಹೊರೆತು ಮರ ಗಿಡಗಳಿರುವುದಿಲ್ಲಾ. ಹಣ ಕೂಡಿಡುವ ತರಾತುರಿಯಲ್ಲಿ ನಮಗಿಂದು ಮನೆಯ ಮುಂದೆ ಒಂದು ಗಿಡನೆಡುಲು ಸಮಯವಿಲ್ಲದಾಗಿದೆ. ಹವಾಮಾನ ವೈಪರೀತ್ಯಕ್ಕೆ ಶಪಿಸಿದರೇನು ಭಾಗ್ಯ, ಅದನ್ನು ಹತೋಟಿಯಲ್ಲಿಡುವ ಗುಟ್ಟನ್ನು ಮರೆತಿರುವುದು ನಮ್ಮ ತಪ್ಪಲ್ಲವೇ. ಬಿಸಿಲಿನ ಬೇಗೆ ನಮಗೆ ಈಗಲೆ ಅತಿ ಎನಿಸಿದರೆ ಮುಂದಿನ ಐದು ವರ್ಷದ ನಂತರದ ಪರಿಸ್ಠಿತಿಯನ್ನು ಒಮ್ಮೆ ಯೋಚಿಸಿ ನೋಡಿ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ಎನ್ನುವ ಕಾಲ ಬರಬಾರದಲ್ಲವೇ. ಇಲ್ಲವಾದರೆ,
ಧರೆಯೆ ಹತ್ತಿ ಉರಿಯುವಾಗ ಬದುಕಲೆಲ್ಲಿ ಓಡುವೆ...

Wednesday, April 08, 2009

ಪಕ್ಷ ವಿ-ಪಕ್ಷಗಳಿಗೆ

ಚುನಾವಣಾ ದಿನಾಂಕ ಪ್ರಕಟಗೊಂಡಿದೆ, ಚುನಾವಣಾ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಎಲ್ಲಾ ರಾಜಕೀಯ ಪಕ್ಷಗಳು ಚುನಾವಣಾ ನಂತರದ ಹಾಗು ಚುನಾವಣಾ ಪೂರ್ವ ಹೋಂದಾಣಿಕೆಗಳನ್ನು ಬಹುತೇಕ ನಿಶ್ಚಯಿಸಿ ತಮ್ಮ ಎದುರಾಳಿಗಳನ್ನು ಜರಿಯುವ ಕಾರ್ಯಗಳನ್ನು ಆರಂಭಿಸಿಯೂ ಆಗಿದೆ. ವಿಪಕ್ಷಗಳ ಧುರೀಣರನ್ನು ತನ್ನತ್ತ ಸೆಳೆಯುವ ಹಗ್ಗ ಜಗಾಟದಲ್ಲಿ ಎಲ್ಲಾ ಪಕ್ಷಗಳು ನಾ ಮುಂದು ತಾ ಮುಂದು ಎನ್ನುತ್ತಿವೆ. ಅವರು ಕೋಮುವಾದಿಗಳು, ಇವರು ದೇಶವನ್ನು ಮಾರಿದವರು ಎಂದು ಒಬ್ಬರನೋಬ್ಬರು ಹೀಗಳೆಯುವುದನ್ನು ಪ್ರತಿ ದಿನ ನಾವೂ ಸುಧ್ಧಿ ಮಾಧ್ಯಮಗಳಲ್ಲಿ ಓದುತ್ತಿದೇವೆ, ನೋಡುತ್ತಿದೇವೆ. ಕೂಸು ಹುಟ್ಟುವ ಮುನ್ನ ಕುಲ ಹುಡುಕಿದ ಹಾಗೆ ಎಲ್ಲಾ ಮಹಾ ಒಕ್ಕೂಟಗಳು ತಮ್ಮ ನಾಯಕ ಯಾರಾಗಬೇಕೆಂದು ತಮ್ಮ ಲಾಭಕ್ಕೆ ಅನುಗುಣವಾಗಿ ನೇಮಿಸಿದೆ. ವಿಶಾಲ ಭಾರತದ ಸಾಮಾನ್ಯ ಪ್ರಜೆಗೆ "ಯಾರು ಹಿತವರು ನಿನಗೆ ಈ ಮೂವರೊಳಗೆ" ಎನ್ನುವ ಪರಿಸ್ಥಿತಿ ಮತ್ತೆ ನಿರ್ಮಾಣವಾಗಿದೆ. ಅಂದು ಭಾರತ ಪ್ರಕಾಶಿಸುತ್ತಿದ್ದರೆ, ಇಂದು ಭಾರತ ನಿರ್ಮಾಣದ ಕನಸು ಕಟ್ಟಲಾಗುತ್ತಿದೆ. ಚುನಾವಣಾ ಪೂರ್ವ ದಿನದ ಪ್ರಚಾರ ಕಾರ್ಯಕ್ಕೆ ಈಗಿನಿಂದಲೆ ಸಿದ್ದತೆಗಳು ಭರದಿಂದ ಸಾಗಿದೆ. ಇವುಗಳನ್ನು ನೋಡಿ, ಚುನಾವಣಾ ಆಯೋಗ ಮೂಕಾಗಿದೆ, ಮಂಕಾಗಿದೆ.
ಆಲದ ಮರದಂತಿದ್ದ ಜನತಾ ಪರಿವಾರದ ಬೇರಾದ ಭಾರತೀಯ ಜನಾತಾ ಪಕ್ಷ, ಹಿಂಧುತ್ವ, ರಾಮಜನ್ಮ ಭೂಮಿಯ ಆಸರೆಯೊಂದಿಗೆ ಮೊಳಕೆಯೊಡೆದು, ಹೆಮ್ಮರವಾಗಿ ಬೆಳೆದ ನಂತರ ತಾನು ಏರಲು ಬಳಸಿದ ಏಣಿಯನ್ನೆ ಒದೆಯಲು ಹುನ್ನಾರ ನಡೆಸುತ್ತಿದೆ. ತನ್ನ ಶಕ್ತಿ ಯಾಗಿದ್ದ, ಅದರ ಮೂಲಕ ಇತರರಿಗೆ ಮಾದರಿ ಯಾಗಿದ್ದ ತನ್ನ ಮೂಲ ಕಾರ್ಯಕರ್ತರನ್ನು ಮೂಲೆಗುಂಪುಮಾಡಿ ದಿನಂಪ್ರತಿ ತಾನು ಹೀಗಳೆಯುತ್ತಿದ್ದ ತನ್ನ ವಿರೋಧಿಗಳನ್ನೆಲ್ಲಾ ತನ್ನತ್ತ ಸೆಳೆದು ತನ್ನ ಕಾರ್ಯಕರ್ತರಿಗೆ, ಅದರ ಮೂಲಕ ತನಗೆ ತಾನೆ ಅವಮಾನ ಮಾಡಿಕೊಂಡಿದೆ. ಐದು ವರ್ಷದ ಹಿಂದೆ ತನ್ನ ಸೈಧ್ಧಾಂತಿಕ ವಿರೋಧಿಗಳಾಗಿದ್ದವರು ಇಂದು ಆ ಪಕ್ಷದ ಸಿಧ್ಧಾಂತಕ್ಕೆ ತಲೆಬಾಗಿರುವುದು ಯಕ್ಷ ಪ್ರಶ್ನೆಯೇ ಸರಿ. ೧೯೪೭ರಿಂದ ಇಲ್ಲಿಯ ತನಕ ಶೇಕಡ 90ರಷ್ಟು ಸಮಯ ಆಧಿಪತ್ಯ ನಡಿಸಿದ (ಅಪ)ಕೀರ್ತಿ ಎದುರಿಸುತ್ತಿರುವ ಕಾಂಗ್ರೆಸ್ ಈಗ ಭಾರತ ನಿರ್ಮಾಣದ ಕನಸ್ಸು ಕಾಣುತ್ತಿರುವುದು ನಮ್ಮ ದೇಶದ ವಿಪರ್ಯಾಸವಲ್ಲವೆ? ಸ್ವಾತಂತ್ರ್ಯ ಭಾರತದಲ್ಲಿ ಸ್ವತಂತ್ರವಾಗಿ ನಿರ್ನಯಗಳನ್ನು ಕೈಗೆತ್ತಿಕೊಂಡು, ಆ ನಿರ್ನಯಗಳನ್ನು ಅನುಷ್ಠಾಣಗೊಳಿಸುವ ಎದೆಗಾರಿಕೆ ಆ ಪಕ್ಷದಲ್ಲಿ ಯಾರಿಗೆದೆ. ಗಿಣಿಪಾಠ ಒಪ್ಪಿಸುವ ಅಧಿನಾಯಕಿ, ಮಕ್ಕಳಂತೆ ಪಾಠಕೇಳುವ ನಾಯಕರು, ಕಾರ್ಯಕರ್ತರು. ಇನ್ನು ತೃತೀಯ ರಂಗದ ಬಗ್ಗೆ ಮಾತನಾಡದಿರುವುದೇ ಲೇಸು. ತಮ್ಮ ಒಕ್ಕೂಟದಲ್ಲಿ ಎಷ್ಟು ಪಕ್ಷಗಳು ಊಳಿಯಲಿದೆ ಎನ್ನುವುದು ಅವರಿಗೇ ತಿಳಿದಿಲ್ಲಾ. Operation ಕಮಲದಂತೆ, Operation ತೃತೀಯ ರಂಗ ಆದರೂ ಅಚ್ಚರಿಯೇನಿಲ್ಲಾ.
ಚುನಾವಣೆಯಲ್ಲಿ ಚಿತ್ರತಾರೆಯರನ್ನು, ಕ್ರೀಡಾಪಟುಗಳನ್ನು ಕಣಕ್ಕಿಳಿಸಿ ಗೆಲುವಿನ ಕನಸು ಕಾಣುವ ಪಕ್ಷಗಳಿಗೆ, ತನ್ನ ಭವ್ಯ ಭವಿಷ್ಯಕ್ಕಾಗಿ, ತನ್ನ ದೇಶದ ಸರ್ವತೋಮುಖ ಏಳಿಗೆಗಾಗಿ ಕನಸು ಕಾಣುವ ಸಾಮನ್ಯ ನಾಗರೀಕನಿಗೆ ಕಣಕ್ಕಿಳಿಸುವ ಎದೆಗಾರಿಯನ್ನು ಏಕೆ ತೋರುವುದಿಲ್ಲಾ? ಚುನಾವಣೆ ಪೂರ್ವದಲ್ಲಿ ಬದಲಾವಣೆಗಾಗಿ ಮತಕೇಳುವ ಪಕ್ಷಗಳು, ಬದಲಾವಣೆಯಾದನಂತರ ಹಿಂದಿನ ಸರ್ಕಾರಗಳ ದುರಾಡಳಿತ, ದಿವ್ಯ ನಿರ್ಲಕ್ಷ್ಯಗಳ ಬಗ್ಗೆ ಮಾತಾಡುವುದೇಕೆ? ಜಾತಿ ಬಲ, ಹಣಬಲದಿಂದ ಮಾತ್ರಾ ಗೆಲುವೆ? ಎಳ್ಳಷ್ಟು ಸಾಧಿಸಿ, ಬೆಲ್ಲದಷ್ಟು ಬೀಗುವ ಪಕ್ಷಗಳ ಅಭಿವೃಧ್ಧಿ ಕಾರ್ಯಗಳನ್ನು ಅವರೇ ಮೆಚ್ಚಿ ಬೆನ್ನು ತಟ್ಟಿಕೊಳ್ಳಬಹುದೇ? ಏನು ಸಾಧನೆ ಮಾಡದೆ ಚುನಾವಣೆ ಬಂದಾಗ ನೀಡಿದ ಭರವಸೆಗಳ್ಳೆಲ್ಲವನ್ನು ಈಡೇರಿಸಿದ್ದೇವೆ ಎನ್ನುವ ಪಕ್ಷಗಳು ತಮ್ಮ ಆತ್ಮಾವಲೋಕನ ಮಾಡಿಕೊಳ್ಳುವುದೆಂದು? ಸ್ವ-ಪ್ರತಿಷ್ಠೆಯನ್ನು ಬದಿಗಿರಿಸಿ ದೇಶಾಭಿಮಾನವನ್ನು ನಮ್ಮ ನಾಯಕರಲ್ಲಿ ಬೆಳೆಸುವವರಾರು? ಈ ದೇಶದ ಅಭಿವೃಧ್ಧಿ ತಮ್ಮೀಂದ ಮಾತ್ರ ಸಾಧ್ಯ ಎನ್ನುವ ಪಕ್ಷಗಳು ತಾನು ಆಳುತ್ತಿರುವ ರಾಜ್ಯಗಳಲ್ಲಿ ಆ ಸಾಧನೆ ಮಾಡಿಲ್ಲವೇಕೆ? ಒಬ್ಬರು ರಾಜ್ಯ್ ಸರ್ಕಾರದ ದಿವ್ಯ ನಿರ್ಲಕ್ಷ್ಯ ಎಂದರೆ, ಮತ್ತೊಬ್ಬರು ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಎನ್ನುತಾರೆ. ಅಧಿಕಾರಕ್ಕೆ ಬರುವ ಮುನ್ನ ಈ ಅಡ್ಡಿಗಳ ಆತಂಕವಿರಲಿಲ್ಲವೇ?
ಕಳೆದ ಕೆಲವು ವರ್ಷಗಳಿಂದ ಚುನಾವಣಾ ಪ್ರಕ್ರಿಯಿಗಳಲ್ಲಿ ಆಗೀರುವ ಒಂದು ಗಮನಾರ್ಹ ಹಾಗು ಪ್ರಶಂಶನಾರ್ಹ ಬದಲಾವಣೆಯೆಂದರೆ ಚುನಾವಣಾ ಪ್ರಣಾಳಿಕೆ. ಬರಿಯ ಆಡು ಭಾಷೆಯಲ್ಲಿ, ಹಾಗೂ ಕ್ಷೇತ್ರಾವಾರು ಹರಿದು ಬರುತ್ತಿದ್ದ ಚುನಾವಾಣಾ ಆಶ್ವಾಷಣೆಗಳು, ಆಡುವ ಜನರ ಬಯಿಗೆ ಆಹಾರವಾದಾಗಿನಿಂದ, ಪ್ರಣಾಳಿಕೆ, ಎಲ್ಲಾ ರಾಜಕೀಯ ಪಕ್ಷಗಳ ಕ್ರಿಯಾಶೀಲತೆಗೆ ಹಿಡಿದ ಕೈಗನ್ನಡಿ. ಚುನಾವಣೆ ಮರುಕಳಿಸಿರುವ ಕಾರಣ ಶೃಜನಶೀಲ ವ್ಯಕ್ತಿಗಳ ನಿರುಧ್ಯೋಗ ಸಮಸ್ಯೆಗೆ ಅಲ್ಪವಿರಾಮ ಬಿದ್ದಂತಾಗಿದೆ ಹಾಗೂ ಅದು ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಾಗದೆ ಒಂದು ರಾಜ್ಯ, ಒಂದು ದೇಶದ ಏಳಿಗೆಗೆ(?) ಒತ್ತು ನೀಡಿವೆ. ವರ್ಣರಂಜಿತ ಮುಖಪುಟದೊಂದಿಗೆ ಈಗ ನಮ್ಮ ನಿಮ್ಮೆಲ್ಲರ ಕೈ ಸೇರಿದೆ. ಆದರೆ ಇವೆಲ್ಲಾ ಕೇವಲ ಭರವಸೆಯೆ ಹೊರೆತು, ಅದನ್ನು ಸಾಧಿಸಲು ತಾನು ಇಂತಹ ಕ್ರಮಗಳನ್ನು ಕೈಗೆತ್ತಿಕೊಳ್ಳುವುದಾಗಿ ಯಾವ ಪಕ್ಷಗಳು ಪ್ರಕಟಿಸಿಲ್ಲಾ. ಏಕೆಂದರೆ ಅದು ಈಡೇರಿಸಲಾಗದ ಭರವಸೆಗಳು, ಹಾಗೂ ದಿನಬೆಳಗಾಗುವುದರೊಳಗೆ ಜನ ನಿರ್ಲಕ್ಷಿಸುವ ಮಾತುಗಳು ಎಂದು ಎಲ್ಲಾ ರಾಜಕೀಯ ಪಕ್ಷಗಳಿಗೂ ಅರಿತಿವೆ. ಕುಡಿಯಲು ಊಚಿತವಾಗಿ ನಿರೂ ದೊರೆಯದ ಈ ಕಾಲದಲ್ಲಿ, ಬಿಪಿಲ್ ಕಾರ್ಡ್ ಹೊಂದಿರುವವರಿಗೆ ಕೆಜಿಯೊಂದಕ್ಕೆ ೩ರೂಗಳಲ್ಲಿ ಅಕ್ಕಿ ಕೊಡಲು ಹೇಗೆ ಸಾಧ್ಯ. ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯದ ಕೊರತೆ ಎದುರಿಸುತ್ತಿರುವ ನಮ್ಮ ಹಳ್ಳಿಯ ಜನರಿಗೆ ಬ್ರಾಡ್ ಬ್ಯಾಂಡ್ ನೀಡಿದರೆ ಏನು ಭಾಗ್ಯ. ದೇಶದಲ್ಲಿರುವ ಪೋಲೀಸ್ ಎಲ್ಲಾ ರಾಜಕೀಯ ವ್ಯಕ್ತಿಗಳ ಭದ್ರತೆಗೆ ಸಾಲದಾದಾಗ ಪ್ರತಿ ನಾಗರೀಕನಿಗೂ ಸುರಕ್ಷತೆ ಹಾಗೂ ಭದ್ರತೆ ಸಾಧ್ಯವೇ. ದೇಶದ ಬೆನ್ನೆಲುಬಾದ ರೈತನ ಮುಗ್ಧತೆಯ ಮೇಲೆ ಸವಾರಿ ನಡೆಸುತ್ತಲೇ ಬಂದಿರುವ ಪಕ್ಷಗಳು ರೈತನ ಕುಟುಂಬಕ್ಕೆ ಯಾವ ವಿಶೇಷ ಯೋಜನೆಗಳನ್ನು ಕಲ್ಪಿಸುತ್ತಿದೆ. ಅಧಿಕಾರದಲ್ಲಿದ್ದಾಗ ಜಾರಿಗೆ ತರಲಾಗದ ಮಹಿಳಾ ಮೀಸಲು ವಿಧೇಯಕವನ್ನು ಮತ್ತೆ ಅಧಿಕಾರ ಬಂದರೆ ಜಾರಿ ಗೊಳಿಸುತಾರೆ ಎಂದು ನಂಬಲು ಆದೀತೆ. ಪಕ್ಷವಾರು ಪ್ರಣಾಳಿಕೆಗೂ, ಒಕ್ಕೂಟದ ಪ್ರಣಾಳಿಕೆಗೂ ತಾಳ ಮೇಳವೇಕಿರುವುದಿಲ್ಲಾ. ಯಾರು ಏನೆ ಹೇಳಿದರು ಪಕ್ಷಗಳು ಚುನಾವಣೆ ಎದುರಿಸುತ್ತಿರುವುದು ಹಾಗೂ ನಂತರ ಅಧಿಕಾರ ಹಂಚಿಕೊಳ್ಳುವುದು ಒಕ್ಕೂಟಗಳ ಅಡಿಯಲ್ಲೇ. ನೀವು ನೀಡಿದ ಭರವಸೆಗಳನ್ನು ಈಡೇರಿಸಲು ನಿಮ್ಮ ಮಿತ್ರ ಪಕ್ಷಗಳಲ್ಲಿ ಸಹಮತವಿಲ್ಲ ಎನ್ನುವ ನಗ್ನ ಸತ್ಯ ನಿಮಗೆ ಅರಿವಿಲ್ಲವೇ. ನಾವೆಲ್ಲರೂ ಒಂದೇ, ಜಾತಿ ಒಂದೇ, ಮತ ಒಂದೇ ಎನ್ನುವಾಗ, ಮತ ಹಾಕುವ ಸಮಯದಲ್ಲಿ ಜನರ ನಡುವೆ ಮತೀಯ ಭಾವನೆಗಳನ್ನು ಮೂಡಿಸುವುದೇಕೆ.
ಆದರೂ, ಚುನಾವಣೆ ಬಂದಿದೆ. ಮತ ಹಾಕುತ್ತೇವೆ. ಆಳಿರುವ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ಜನ ತನ್ನ ಸಾಧನೆ ಮೆಚ್ಚಿ ಮತ್ತೆ ಆಶಿರ್ವಧಿಸಿದಾರೆ ಎನ್ನುತ್ತಾರೆ. ವಿರೋಧ ಪಕ್ಷ ಅಧಿಕಾರಕ್ಕೆ ಬಂದರೆ ಅದು ಅಧಿಕಾರಿ ವಿರೋಧಿ ಅಲೆಯಾಗಿರುತ್ತದೆ. ಯಾರಾದರೋಬ್ಬರು ಪ್ರಧಾನಿ ಆಗುತಾರೆ, ಮಂತ್ರಿಗಳಾಗುತಾರೆ. ಭರವಸೆಗಳು ಭರವಸೆಗಳಾಗೆ ಊಳಿಯುತ್ತದೆ. ಭರವಸೆ ಈಡೇರಿದರೆ ಮುಂದಿನ ಚುನಾವಣೆಗೆ ಎಲ್ಲಿ ಬೆಲೆ. ಈಗಿನ ಪರಿಸ್ಥಿಯಲ್ಲಿ ಯಾರು ಏನೇ ಮಾಡಲಿ, ಐದು ವರ್ಷ ಅಧಿಕಾರ ನಡೆಸಲಿ ಎನ್ನುವಂತಾಗಿದೆ. ದೈನಂದಿನ ಖರ್ಚಿನ ಮಧ್ಯೆ ಚುನಾವಣಾ ವೆಚ್ಚವೂ ನಾಗರೀಕನ ಮೇಲೆ ಬೀಳಬಾರದಲ್ಲವೇ.
ಜೈ ಹೋ

Sunday, September 09, 2007

ತಮಿಳರಿಗೆ ತಮ್ಮ ಭಾಷೆ ಬೆಣ್ಣೆ, ಸುಮ್ಮನೆ ಕೂತೋರಿಗೆ ಹಿಂದಿ ಸುಣ್ಣ!


ನಮ್ಮ ದೇಶದಲ್ಲಿ ಸಮಾನತೆಯೇ ಜೀವಾಳ ಅಂತ ನೀವೇನಾದ್ರೂ ನಂಬ್ಕೊಂಡಿದ್ರೆ ಭಾರತ ಸರ್ಕಾರ ಹೊರಡ್ಸಿರೋ ಆಡಳಿತ ಭಾಷಾ ಕಾಯ್ದೆ ಒಮ್ಮೆ ನೋಡಿ, ಅಬ್ಬಬ್ಬಬ್ಬಬ್ಬಾ ಎಷ್ಟು ಸಮಾನತೆ ಇದೆ, ಏನು ಕತೆ ಅಂತ! ಹಿಂದಿ ಹೇರಕ್ಕೇಂತ್ಲೇ ಮೀಸಲಾಗಿರೋ ಕೇಂದ್ರಸರ್ಕಾರದ "ಆಡಳಿತ ಭಾಷೆ ವಿಭಾಗ" ಹಿಂದಿ ಹೇರೋದಕ್ಕೆ ಹಾಕಿಕೊಂಡಿರೋ ನಿಯಮಗಳ್ನ ಹೇಳುವಾಗ ಏನ್ ಹೇಳತ್ತೆ ನೋಡಿ:
1. Short title, extent and commencement -(i) These rules may be called the Official Languages (Use for Official Purposes of the Union) Rules, 1976.(ii) They shall extend to the whole of India, except the State of Tamilnadu.(iii) They shall come into force on the date of their publication in the Official Gazette.
ಮೊದಲಲ್ಲೇ ನಮ್ಮ ಕಣ್ಣಿಗೆ ರಾಚೋದು, ಈ ಕಾಯ್ದೆ ತಮಿಳುನಾಡಿಗೆ ಅನ್ವಯ ಆಗೋಲ್ಲಾ ಅನ್ನೊ ಸಾಲು. ಯಾಕೆ? ಯಾವ ಒತ್ತಡಕ್ಕೆ ಮಣಿದು ಹೀಗೆ ತಮಿಳುನಾಡಿಗೆ ಹಿಂದಿ ಹೇರಿಕೆ ಅನ್ವಯಿಸೋದಿಲ್ಲ ಅನ್ನೋ ನಿಯಮ? ನಮ್ ರಾಜಕಾರಣಿಗಳು ಇದನ್ನ ಕರ್ನಾಟಕಕ್ಕೆ ಯಾಕೆ ದೊರಕಿಸಿಕೊಟ್ಟಿಲ್ಲ ಅಂತ ಯೋಚ್ನೆ ಮಾಡು ಗುರು!ಅವ್ರು ಇದನ್ನ ಪಡ್ಕೊಂದಿರೋದಕ್ಕೆ ನೇರವಾಗಿ ಕಾಣೊ ಕಾರಣ ತಮ್ನ ತಾವೇ ಆಳ್ಕೊಳ್ಳೋಕೆ ಅಂತಲೇ ಅಲ್ಲಿ ಪ್ರಾದೇಶಿಕ ಪಕ್ಷಗಳಾಗಿರೋದು. ಇಂಥ ಅಧಿಕಾರಾನ ನಾವು ಪಡ್ಕೊಳ್ಳೋಕೆ ನಮ್ದೇ ಪ್ರಾದೇಶಿಕ ಪಕ್ಷಗಳು ಬೇಕು ಅನ್ನೋದು ಸ್ಪಷ್ಟ ಗುರು!ನಮ್ ಬೆಂಗಳೂರಿರಲಿ, ಚಾಮರಾಜನಗರದಲ್ಲಾಗಲೀ, ಹಿಂದಿಯ ಸೋಂಕೇ ಇಲ್ಲದ ಒಳನಾಡಿನ ಊರುಗಳಲ್ಲಾಗಲಿ, ಅಲ್ಲಿನ ಅಂಚೆ ಕಚೇರಿ, ರೇಲ್ವೆ ನಿಲ್ದಾಣ, ದೂರವಾಣಿ ಕಚೇರಿ - ಈ ಥರದ ಯಾವುದೇ ಕೇಂದ್ರ ಸರ್ಕಾರಿ ಕಚೇರೀಲಿ, ಯಾರಾದ್ರೂ ಹಿಂದಿ ಭಾಷೇಲಿ ಒಂದು ಮನವಿ/ದೂರು ಕೊಟ್ಟರೆ ಅದಕ್ಕೆ ಉತ್ತರಾನ ಹಿಂದೀಲೇ ಕೊಡಬೇಕು ಅನ್ನುತ್ತೆ ಈ ಕಾನೂನು.ಈ ಥರ ಕಾನೂನಿನಿಂದ ಏನು ಅನುಕೂಲಾನಪ್ಪಾ ಅಂದ್ರೆ ಹಿಂದಿ ಮಾತಾಡೋನು ದೇಶದ ಯಾವ ಮೂಲೇಲಿ ಬೇಕಾದ್ರೂ ನೆಮ್ಮದಿಯಾಗಿ ಬದುಕ್ಬೋದು.ಈ ದೇಶ ಇರೋದು ಬರೀ ಹಿಂದಿ ಮಾತಾಡೊ ಜನಾ ನೆಮ್ಮದಿಯಾಗ್ ಬಾಳಕ್ಕೆ ಅಂತ ಅರ್ಥಾನಾ ಗುರು? ಇದು ನಿಜವಾದ ಪ್ರಜಾಪ್ರಭುತ್ವಾನಾ? ಪ್ರಜೆಗಳು ಕನ್ನಡದೋರು, ಪ್ರಭುಗಳು ಹಿಂದಿಯೋರು ಅಂತಾನಾ ಅರ್ಥ?